ಗುರುವಾರದ (ಡಿ.20) ‘ಪ್ರಜಾವಾಣಿ’ ಸಂಚಿಕೆಯು ಬೆಳ್ಳಂಬೆಳಿಗ್ಗೆಯೇ ಎರಡು ನಿಮಿಷ ಅಳುವಂತೆ ಮಾಡಿಬಿಟ್ಟಿತು! ಆಸ್ಪತ್ರೆಯಿಂದ ಮಠಕ್ಕೆ ಮರಳಿದ ಸಿದ್ದಗಂಗಾ ಸ್ವಾಮೀಜಿಗಳನ್ನು ಕಂಡ ಸಾವಿರಾರು ಮಕ್ಕಳು ಒಕ್ಕೊರಲಿನಿಂದ ಕೂಗುತ್ತಾ ಓಡಿ ಬರುತ್ತಿರುವ ಚಿತ್ರವನ್ನು ನೋಡಿ ದುಃಖ ಉಮ್ಮಳಿಸಿತು.
ಅಪ್ರತಿಮ ಮಾನವತಾವಾದಿಯ ಮಾತೃಹೃದಯಕ್ಕೆ ಕೋಟಿ ಕೋಟಿ ನಮನಗಳು.