‘ಕರ್ನಾಟಕದ ಮುಖ್ಯಮಂತ್ರಿಯನ್ನು ಕರ್ನಾಟಕಕ್ಕೆ ಸಂಬಂಧವಿಲ್ಲದ ದೆಹಲಿಯ ಹೈಕಮಾಂಡ್ ಯಾಕೆ ನಿರ್ಧಾರ ಮಾಡಬೇಕು’ ಎಂದು ಅರುಣ್ ಜಾವಗಲ್ ಅವರು ಕೇಳುವುದರಿಂದ (ಪ್ರ.ವಾ., ದಿನದ ಟ್ವೀಟ್, ಜುಲೈ 27) ಹಿಡಿದು, ‘ರಾಜ್ಯಗಳು ಕೇಂದ್ರದ ಅಡಿಯಾಳಲ್ಲ’ ಎಂದು ರುದ್ರೇಶ್ ಅದರಂಗಿ ಅವರು ಹೇಳಿರುವ (ವಾ.ವಾ., ಜುಲೈ 28) ಮತ್ತು ಇಂಥದ್ದೇ ಹಲವಾರು ಅಭಿಪ್ರಾಯಗಳಲ್ಲೇ ಅವಕ್ಕೆ ಉತ್ತರವೂ ಅಡಗಿದೆ. ಅದೇ ‘ರಾಷ್ಟ್ರೀಯ ಪಕ್ಷ’ ಎಂಬ ಪದ. ಹಲವು ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳನ್ನು ನೋಡಿಯೂ, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್ ಅವರಂಥವರ ನಿದರ್ಶನಗಳು ಕಣ್ಣಮುಂದಿರುವಾಗಲೂ ಒಳ್ಳೆಯ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸದೆ ಪ್ರತಿಯೊಂದಕ್ಕೂ ದೆಹಲಿಗೆ ಓಡುವವರನ್ನು (ಅದೂ ನಮ್ಮ ದುಡ್ಡಿನಲ್ಲಿ) ಹುಟ್ಟುಹಾಕಿದವರೇ ನಾವು. ಹೀಗಾಗಿ, ಬೈಯಬೇಕಾದರೆ ನಮ್ಮನ್ನು ನಾವೇ ಕನ್ನಡಿಯ ಮುಂದೆ ನಿಂತು ಬೈದುಕೊಳ್ಳಬೇಕೇ ಹೊರತು ಹೈಕಮಾಂಡ್ ಅನ್ನಲ್ಲ.