‘ಶಾಸಕ ಜಿ.ಟಿ.ದೇವೇಗೌಡರು ಪಕ್ಷದಿಂದ ಏನೂ ಮಾಡಿಕೊಂಡಿಲ್ಲವಾ’ ಎಂದು ಪ್ರಶ್ನಿಸಿದ್ದಾರೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ (ಪ್ರ.ವಾ., ಡಿ. 19). ಅಂದರೆ, ಏನಾದರೂ ಲಾಭ ಮಾಡಿಕೊಳ್ಳಲು ಮಾತ್ರ ಪಕ್ಷಗಳಿವೆಯೇ? ಪಕ್ಷಗಳಿರುವುದು ಒಂದು ರಾಜಕೀಯ ಶಕ್ತಿಯಾಗಿ ಬೆಳೆದು, ಅಧಿಕಾರ ಗಳಿಸಿ ಜನರಿಗೆ ಒಳ್ಳೆಯದು ಮಾಡಲಿಕ್ಕಾಗಿಯೇ ಹೊರತು ಲಾಭ ಮಾಡಿಕೊಳ್ಳಲಲ್ಲ.