ಮನುಕುಲವನ್ನು ಜ್ಞಾನಜ್ಯೋತಿಯಂತೆ ಬೆಳಗುವ ಪುಸ್ತಕಗಳ ಮಹತ್ವ ಅರಿತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬಿಇಒ ಜಿ.ಬಿ.ಬಳಗಾರ ಅವರು, ಸಾರ್ವಜನಿಕರಿಂದ ಪುಸ್ತಕಗಳ ಸಂಗ್ರಹಕ್ಕಾಗಿ ಆರಂಭಿಸಿರುವ ‘ಪುಸ್ತಕ ಜೋಳಿಗೆಗೆ ನಿಮ್ಮದೊಂದು ಪುಸ್ತಕ ಹೋಳಿಗೆ’ ಉಪಕ್ರಮ ಶ್ಲಾಘನೀಯ. ಈ ರೀತಿಯ ಸತ್ಕಾರ್ಯವನ್ನು ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿನ ಬಿಇಒಗಳು ಮತ್ತು ಆಸಕ್ತ ಶಿಕ್ಷಕರು ಕೈಗೊಂಡರೆ ಓದುಗರಿಗೆ ಉಪಯೋಗವಾಗುತ್ತದೆ.