ಲಕ್ಷಾಂತರ ಜನರು ರಾಜಧಾನಿಯಿಂದ ಗುಳೆ ಹೋಗಿದ್ದಾರೆ. ಸಣ್ಣ ನಗರ, ಪಟ್ಟಣಗಳಲ್ಲಿ ಈ ಬೇಸಿಗೆಯಲ್ಲಿ ನೀರಿನ ಅಭಾವ ಜಾಸ್ತಿ ಇದೆ. ಇದ್ದಬದ್ದ ಕೆರೆ, ಹಳ್ಳಕೊಳ್ಳಗಳ ಜಲಮೂಲ ಬತ್ತುತ್ತಿದೆ, ಕೊಳಕು ಹೆಚ್ಚುತ್ತಿದೆ. ಈ ದಿನಗಳಲ್ಲೇ ಕಲುಷಿತ ನೀರಿನಿಂದಾಗಿ ಕಾಮಾಲೆ, ಅತಿಸಾರ, ವಿಷಮ ಶೀತಜ್ವರ (ಟೈಫಾಯಿಡ್), ದಢಾರ ಮುಂತಾದ ಕಾಯಿಲೆಗಳೂ ಹೆಚ್ಚುತ್ತವೆ. ಅಂಥ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಜಾಗವೂ ಇರಲಿಕ್ಕಿಲ್ಲ, ಆದ್ಯತೆಯೂ ಇರುವುದಿಲ್ಲ. ಕ್ಲಿನಿಕ್ ಅಥವಾ ಔಷಧ ಅಂಗಡಿಗಳಿಗೆ ಹೋಗಲು ವಾಹನಗಳೂ ಸಿಗದಂತೆ ಆಗಬಹುದು.