ರಾಜ್ಯದಾದ್ಯಂತ ಏಕಕಾಲಕ್ಕೆ ಸಾವಿರಾರು ಹೊಸ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಅಡಿಗಲ್ಲು ಇಡುತ್ತಿರುವ ಸಂಗತಿ ಸಮಾಧಾನಕರ. ಈ ಶಾಲೆಗಳ ಗೋಡೆಗಳಿಗೆ ಉಪಯೋಗಿಸುವ ಬಣ್ಣವು ಪ್ರಧಾನ ಅಂಶವಾಗಬಾರದು. ವಿವೇಕಾನಂದರು ತೊಡುತ್ತಿದ್ದ ಉಡುಗೆಯ ಬಣ್ಣವೆಂಬ ಕಾರಣಕ್ಕೆ ವಿವೇಕ ಯೋಜನೆ ಶಾಲೆಗಳ ಗೋಡೆಗಳು ಕೇಸರಿಮಯ ಆಗಿರಬೇಕೆಂದಿಲ್ಲ. ಹಾಗೆಯೇ ಕೇಸರಿ ಎನ್ನುವ ಕಾರಣಕ್ಕೆ ವಿರೋಧಿಸಬೇಕೆಂದೂ ಇಲ್ಲ. ಮುಖ್ಯವಾಗಿ ಮಕ್ಕಳಿಗೆ ಸುಭದ್ರ, ಸುರಕ್ಷಿತ ವಾತಾವರಣದಲ್ಲಿ ಶಿಕ್ಷಣ ದೊರೆಯಬೇಕಾದ ಸಂದರ್ಭವಿದು. ಇದು ವಿವಾದವಾಗದಂತೆ, ಬಣ್ಣದಿಂದಾಗಿ ಮಕ್ಕಳ ಮನಸ್ಸುಗಳ ನಡುವೆ ಗೋಡೆ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು.
–ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ