ಅಂತರ್ಜಲ ಮಾಲಿನ್ಯದಿಂದಾಗಿ ಕುಡಿಯುವ ಶುದ್ಧ ನೀರು ದುರ್ಲಭವಾಗುತ್ತಿದೆ ಎಂದು ಕೇಶವ ಕೊರ್ಸೆ ತಮ್ಮ ಲೇಖನದಲ್ಲಿ (ಪ್ರ.ವಾ., ನ. 15) ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಕುಡಿಯಲು, ಗೃಹ ಬಳಕೆಗೆ, ಕೃಷಿ, ಕೈಗಾರಿಕೆಗೆ ಯಥೇಚ್ಛವಾಗಿ ಪರಿಶುದ್ಧ ಮಳೆನೀರು ದೊರೆಯುತ್ತದೆ. ಆದರೆ ಮಳೆನೀರಿನ ಸಂಗ್ರಹ, ಜಾಣ್ಮೆಯ ಬಳಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡದೇ ಇರುವುದರಿಂದ ನೀರು ದುರ್ಲಭವಾಗುತ್ತಿದೆ.