ಬಸ್ಗಳಿಗಾಗಿ ಕಾಯುವ ಜನರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಸಲುವಾಗಿ ನಿಲ್ದಾಣಗಳನ್ನು ನಿರ್ಮಿಸ
ಲಾಗುತ್ತದೆ. ಹೀಗಿರುವಾಗ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಅದನ್ನು ಸಿಂಗಾರ ಮಾಡುವಂತಹದ್ದು ಏನೂ ಇಲ್ಲ. ಸಂಸದರು ಮತ್ತು ಶಾಸಕರು ಒಂದೇ ಪಕ್ಷದವರಾಗಿದ್ದು, ಚುನಾವಣಾ ಸಮಯವಾದ್ದರಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಇದಾಗಿದೆ. ಸಾರ್ವಜನಿಕರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವಿದ್ದರೆ ಇದರ ಗಾಳಿಯು ಮೈಸೂರು ಬಿಟ್ಟು ಹೊರಗೆ ಬರುವುದಿಲ್ಲ.
–ರಾಜು ಬಿ. ಲಕ್ಕಂಪುರ,ಜಗಳೂರು