ಎಲ್ಲರೊಳಗೊಂದಾಗುವ, ಎಲ್ಲರೊಂದೆನ್ನುವ ಭಾವ, ಭಾರತೀಯ ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಜೀವಂತ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಕುರಾನ್, ಬೈಬಲ್, ಗ್ರಂಥಸಾಹಿಬ್ಗಳ ಸಾರ ಇಷ್ಟೇ: ಬದುಕು, ಬದುಕಲು ಬಿಡು. ಅಣಬೇರು ಗ್ರಾಮದ ಜನತೆ ನಿಜಕ್ಕೂ ಮುಸ್ಲಿಂ ಸಮುದಾಯದವರಿಗೆ ನೀಡಿದ ರಂಜಾನ್ನ ಅಮೂಲ್ಯ ಉಡುಗೊರೆ ಇದು. ಈ ಭಾವ ಭಾರತದಾದ್ಯಂತ ಹರಡಲಿ.