ಅಡಿಕೆಯಿಂದ ಕ್ಯಾನ್ಸರ್ನಂಥ ರೋಗಗಳು ಬರುತ್ತವೆ, ಹೀಗಾಗಿ ಅಡಿಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಜಾರ್ಖಂಡ್ನ ಬಿಜೆಪಿ ಸಂಸದರೊಬ್ಬರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಅನಾದಿ ಕಾಲದಿಂದಲೂ ಹಳ್ಳಿಯ ಜನ ಪರಂಪರಾನುಗತವಾಗಿ ಅಡಿಕೆ ತಿನ್ನುತ್ತಲೇ ಬಂದಿದ್ದಾರೆ. ಅಡಿಕೆ ಬರಿಯ ತಿನ್ನುವ ವಸ್ತುವೊಂದೇ ಅಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತೀಕ. ಮನೆಗೆ ನೆಂಟರಿಷ್ಟರು ಬಂದಾಗ ಊಟವಾದ ಬಳಿಕ ತಾಂಬೂಲವನ್ನು ಒಂದು ತಟ್ಟೆಗೆ ಹಾಕಿಕೊಡುವುದು ಹಿಂದಿನಿಂದಲೂ ಬಂದಿರುವ ಪದ್ಧತಿ.