ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕವಿಗೋಷ್ಠಿ: ಅವರವರಿಗೇ ಅವಕಾಶ!

Last Updated 28 ಸೆಪ್ಟೆಂಬರ್ 2022, 20:44 IST
ಅಕ್ಷರ ಗಾತ್ರ

ದಸರಾ ಕವಿಗೋಷ್ಠಿಯಲ್ಲಿ ಹಲವರಿಗೆ ಮತ್ತೆ ವೇದಿಕೆ ಒದಗಿಸಲಾಗಿದೆ ಎಂಬ ಸುದ್ದಿ (ಪ್ರ.ವಾ., ಸೆ. 28) ಓದಿ ಬೇಸರವಾಯಿತು. ಹಲವು ಹಿರಿಯ ಸಾಹಿತಿಗಳಿಗೆ ಮತ್ತೆ ಮತ್ತೆ ಅವಕಾಶ ಸಿಗುತ್ತಿರುವುದು ಬರೀ ದಸರಾ ಕಾರ್ಯಕ್ರಮ ಅಥವಾ ಕವಿಗೋಷ್ಠಿಗಷ್ಟೇ
ಸೀಮಿತವಾಗಿಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಂತೂ ಈ ಪರಿಪಾಟವು ಮಿತಿಮೀರಿದೆ. ಒಂದು ಸಲ ಕವಿಗೋಷ್ಠಿ, ಮತ್ತೊಂದು ಸಲ ಆಶಯ ಭಾಷಣ, ಮಗದೊಂದು ಸಲ ಅತಿಥಿ, ಇನ್ನೊಂದು ಸಲ ಸನ್ಮಾನ... ಹೀಗೆ ಸಾಲು ಸಾಲು ಅವಕಾಶಗಳು ಪ್ರತಿವರ್ಷ ಮರಳಿ ಅವರವರಿಗೇ ಸಿಗುತ್ತವೆ. ಅನುಮಾನವಿದ್ದವರು ನಾಲ್ಕಾರು ವರ್ಷಗಳ ಆಮಂತ್ರಣ ಪತ್ರಿಕೆ ತೆಗೆದು ನೋಡಬಹುದು. ಅದರಂತೆ ದಸರಾ ಆಮಂತ್ರಣ ಪತ್ರಿಕೆಯನ್ನೂ ಪರಿಶೀಲಿಸಬಹುದು.

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT