ಹೆಸರನ್ನು ಬದಲಿಸುವುದರ ಬದಲಿಗೆ ಇನ್ನೊಂದು ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಹೆಸರನ್ನು ಇಟ್ಟಿದ್ದರೆ ಅವರ ಘನತೆ ಹೆಚ್ಚುತ್ತಿತ್ತು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಮುಂದಿನ ಚುನಾವಣೆಯಲ್ಲಿ ಅಕಸ್ಮಾತ್ ತೆಲುಗುದೇಶಂ ಪಕ್ಷ ಅಧಿಕಾರಕ್ಕೆ ಬಂದರೆ, ಈ ವಿಶ್ವವಿದ್ಯಾಲಯಕ್ಕೆ ಹಳೆ ಹೆಸರೇ ಬರುವುದು ನಿಶ್ಚಿತ. ರಾಜಕಾರಣದಲ್ಲಿ ದ್ವೇಷ ಭಾವಕ್ಕೂ ಒಂದು ಮಿತಿ ಇರಬೇಕು.