‘ಕೃಷಿ ಭೂಮಿ ಮತ್ತು ನಿವೇಶನ ಹವಣಿಕೆ’ ಕುರಿತ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ,
ಆ. 23) ನಮ್ಮನ್ನು ಚಿಂತನೆಗೆ ಹಚ್ಚುವಂತಿದೆ. ನಾವು ಬಟ್ಟೆಗಳನ್ನು ಉತ್ಪಾದಿಸಬಹುದು, ಕೃತಕ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಮತ್ತು ನಮ್ಮ ಬುದ್ಧಿಗೆ ಕಸರತ್ತು ಒಡ್ಡುವ ಏನನ್ನಾದರೂ ಸೃಷ್ಟಿಸಬಹುದು. ಆದರೆ ಕೃಷಿ ಭೂಮಿಯನ್ನು ಮಾತ್ರ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡರೆ ಸಾಕು.