ಕಾಶ್ಮೀರದಲ್ಲಿ ಉಗ್ರನೊಬ್ಬ ತಹಶೀಲ್ ಕಚೇರಿಗೆ ನುಗ್ಗಿ ಕಾಶ್ಮೀರಿ ಪಂಡಿತ ಸಮುದಾಯದ ನೌಕರರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ವರದಿ (ಪ್ರ.ವಾ., ಮೇ 13) ಓದಿ ದುಃಖವಾಯಿತು. ಕಾಶ್ಮೀರದ ರಕ್ತಸಿಕ್ತ ಇತಿಹಾಸವನ್ನು ಯಾವ ಪ್ರಜ್ಞಾವಂತ ಸಮಾಜವೂ ಕ್ಷಮಿಸುವುದಿಲ್ಲ. ಇಸ್ಲಾಂ ಮೂಲಭೂತವಾದಿಗಳು ಇನ್ನಾದರೂ ಬದಲಾಗಬೇಕು. ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತ ಸರ್ಕಾರವು ಅಂತರರಾಷ್ಟ್ರೀಯ ಮಟ್ಟದ ಪ್ರಯತ್ನವನ್ನು ತೀವ್ರಗೊಳಿಸಬೇಕು. ಜಮ್ಮು–ಕಾಶ್ಮೀರದಲ್ಲಿ ಉದ್ಯೋಗ, ಮೂಲ ಸೌಕರ್ಯಗಳನ್ನು ಒದಗಿಸಬೇಕು. ಉಗ್ರಗಾಮಿಗಳನ್ನು ನಿರ್ದಾಕ್ಷಿಣ್ಯವಾಗಿ ಸದೆಬಡಿಯಬೇಕು. ಭಾರತೀಯರಾದ ಎಲ್ಲ ಧರ್ಮದವರೂ ಅಲ್ಲಿ ಧೈರ್ಯವಾಗಿ ಬದುಕು ಕಟ್ಟಿಕೊಳ್ಳುವ ಸಹಜ, ಶಾಂತಿಯುತ ವಾತಾವರಣ ನಿರ್ಮಾಣವಾಗಬೇಕು.