ಕುಮಾರಸ್ವಾಮಿ ಅವರು ‘ನನ್ನ ಸುದ್ದಿಗೆ ಬಂದರೆ ನಿಮ್ಮೆಲ್ಲಾ ಜಾತಕ ಬಿಚ್ಚಿಡುತ್ತೇನೆ. ನನ್ನ ಬಳಿ ದಾಖಲೆ ಇದೆ’ ಎಂದು ಹೇಳುವುದು ಇದೇನೂ ಮೊದಲಲ್ಲ. ಹಾಗಿದ್ದರೆ ಅವರ ಈ ಮಾತಿನ ಅರ್ಥ ಏನು? ನನ್ನ ತಂಟೆಗೆ ಬಂದರೆ ಮಾತ್ರ ನಿಮ್ಮ ಭ್ರಷ್ಟಾಚಾರ ಬಯಲು ಮಾಡುತ್ತೇನೆ ಎಂದೇ? ಇದು ಸರಿಯೇ? ತಪ್ಪು ಯಾರೇ ಮಾಡಲಿ, ಅವರ ಬಗ್ಗೆ ದಾಖಲೆ ಇದ್ದರೆ ಅದನ್ನು ‘ಬಹುಜನ ಹಿತಾಯ’ ಅನ್ನುವ ಹಾಗೆ, ಸಾರ್ವಜನಿಕ ಹಿತಾಸಕ್ತಿಯಿಂದ ಬಿಡುಗಡೆ ಮಾಡಬೇಕಲ್ಲವೇ? ನೀವು ಅಧಿಕಾರದಲ್ಲಿ ಇರುವವರನ್ನು ಓಲೈಸಬೇಕಾದ ಅಗತ್ಯ ಇಲ್ಲದಿದ್ದರೆ ಅದನ್ನು ಬಿಡುಗಡೆ ಮಾಡಿ, ಸಮಾಜದಲ್ಲಿರುವ ಭ್ರಷ್ಟಾಚಾರ ಅಷ್ಟೋ ಇಷ್ಟೋ ಕಡಿಮೆಯಾದರೆ ಅದರ ಶ್ರೇಯಸ್ಸು ನಿಮಗೇ ಅಲ್ಲವೇ?