‘ಬಲಿ ಪಾಡ್ಯಮಿ: ಅಹಂ ವಿಸರ್ಜನೆಯ ಸಂದೇಶ’ ಲೇಖನದಲ್ಲಿ (ಪ್ರ.ವಾ., ನ. 5) ಎಸ್.ಸೂರ್ಯಪ್ರಕಾಶ ಪಂಡಿತ್ ಅವರು, ಒಬ್ಬ ಚಕ್ರವರ್ತಿ ಭೂಮಿಯನ್ನೂ, ದೇವನಾಡನ್ನೂ, ಇಂದ್ರನ ಸ್ಥಾನವನ್ನೂ ಗೆದ್ದಾತ; ಆತನಲ್ಲಿ ಅಹಂ ಇದ್ದುದೇ ಆತನ ನಾಶಕ್ಕೆ ಕಾರಣವಾಯಿತು ಎಂದಿದ್ದಾರೆ. ಇಷ್ಟೆಲ್ಲ ಗೆದ್ದಾತನಲ್ಲಿ ಒಂಚೂರು ಅಹಂ ಪ್ರವೇಶ ಮಾಡಿದರೆ ಅದು ಸಹಜವಲ್ಲವೇ? ಆ ಕಾರಣಕ್ಕಾಗಿಯೇ ಪ್ರಜಾನುರಾಗಿ ಆಗಿದ್ದ, ದಾನಶೂರನಾಗಿದ್ದ ಬಲೀಂದ್ರನನ್ನು ತುಳಿದು ಪಾತಾಳಕ್ಕೆ ಅಟ್ಟಿದ್ದು ಯಾಕೋ ಏನು ವಿವರಣೆ ಕೊಟ್ಟರೂ ಸಮಾಧಾನ ಕೊಡುವುದಿಲ್ಲ. ಮಕ್ಕಳಿಗೆ ಈ ಕತೆ ಹೇಳುವುದು ಕಷ್ಟವಾಗುತ್ತದೆ.