‘ಕೃಷಿ ಆದಾಯ ಹೆಚ್ಚಳಕ್ಕೆ ರೈತರ ಸಮಿತಿ’ ಸುದ್ದಿ (ಪ್ರ.ವಾ., ಆ. 26) ಓದಿ ಆಶ್ಚರ್ಯವಾಯಿತು. ಮುಖ್ಯಮಂತ್ರಿಯವರು ಈ ಕಾರ್ಯಕ್ಕೆ ಪೂರಕವಾಗಿ ಇನ್ನೊಂದು ನಿರ್ದೇಶನಾಲಯ ಸ್ಥಾಪಿಸುವ ಬಗೆಗೂ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮೂಲ ಘೋಷಣೆಯ ಪ್ರಕಾರ, ಮುಂದಿನ ವರ್ಷದ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು, ಅದು ಅಸಂಭವ. ಹೊಸ ಸಮಿತಿ, ಸಂರಚನೆ ಆರಂಭಿಸುವ ಮೊದಲು ಈಗಿರುವ ವ್ಯವಸ್ಥೆಯನ್ನು ಹೇಗೆ ಮರುಹೊಂದಿಸಬೇಕು ಎಂದು ಪರಿಶೀಲಿಸಬೇಕು. ಪ್ರಸ್ತುತ ಕಮಿಷನರೇಟ್, ನಿರ್ದೇಶನಾಲಯ, ವಿಶ್ವವಿದ್ಯಾಲಯ ಇವುಗಳ ಸಿಬ್ಬಂದಿ, ಸೇವೆಗಳು ಹೊಸ ಆಶಯಗಳನ್ನೂ ಒಳಗೊಳ್ಳಬಹುದಲ್ಲವೆ? ಅವುಗಳ ವೆಬ್ಸೈಟ್ ನೋಡಿದರೆ ನೇಮಕಾತಿ, ಸಬ್ಸಿಡಿ ಇಂತಹವೇ ಹೆಚ್ಚು ಕಾಣುತ್ತವೆ.