ದೇಶ ‘ವಿಭಜನೆಯ ಕ್ರೌರ್ಯದ ನೆನಪಿನ ದಿನ’ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಕೆ.ಪಿ.ಸುರೇಶ್ ಅವರ ಲೇಖನವನ್ನು (ಪ್ರ.ವಾ., ಆ. 21) ಓದಿ ಮನಸ್ಸಿಗೆ ಅಹಿತವಾಯಿತು. ದೇಶ ವಿಭಜನೆಯು ಕೋಟ್ಯಂತರ ಜನರ ಕನಸುಗಳನ್ನು, ಭಾವೈಕ್ಯ ಭಾವನೆಗಳನ್ನು ಛಿದ್ರಗೊಳಿಸಿತು. ಎಷ್ಟೋ ಪ್ರದೇಶಗಳು ವಿಭಜನೆಯಿಂದ ದಾಯಾದಿಗಳಂತಾಗಿ ಸಾಮಾಜಿಕ, ಆರ್ಥಿಕ ಹಿನ್ನಡೆ ಅನುಭವಿಸುವಂತೆ ಆಗಿರುವುದು ಸತ್ಯವೇ ಆಗಿದೆ. ಹೀಗಿದ್ದಾಗ್ಯೂ ಇಡೀ ಲೇಖನದಲ್ಲಿ ಪ್ರಧಾನಿಯವರನ್ನು ತಪ್ಪಿತಸ್ಥರೆಂದು ಬಿಂಬಿಸುವ ಪ್ರಯತ್ನ ಢಾಳಾಗಿ ಕಾಣುತ್ತಿದೆ. ಸಾಮರಸ್ಯಕ್ಕಾಗಿ ನರೇಂದ್ರ ಮೋದಿಯವರ ಅಫ್ಗಾನಿಸ್ತಾನ, ಪಾಕಿಸ್ತಾನದ ಭೇಟಿಗಳನ್ನು ಲೇಖಕರು ಏಕೆ ಮರೆತರೋ ತಿಳಿಯುತ್ತಿಲ್ಲ!