ದೇಶ ವಿಭಜನೆಯ ಕ್ರೌರ್ಯದ ನೆನಪಿನ ದಿನ ಆಚರಿಸುವ ಅಗತ್ಯದ ಪರವಾಗಿ ಆರ್ಎಸ್ಎಸ್ನ ರಾಮ್ ಮಾಧವ್ ಚರ್ಚಿಸಿದ್ದಾರೆ (ಪ್ರ.ವಾ., ಆ. 21). ಅದರ ಅಗತ್ಯ ಇಲ್ಲ ಎಂಬುದು ನನ್ನ ಅಭಿಪ್ರಾಯ. ಬಿಜೆಪಿಯ ಈ ನಡೆಯು ಹಿಂದೂ ಮತಗಳ ಧ್ರುವೀಕರಣದ ಉದ್ದೇಶದಿಂದ ಕೂಡಿದೆ ಎಂದು ಚಿಕ್ಕ ಮಕ್ಕಳೂ ಹೇಳಬಹುದು. ಇದರಿಂದ ಹಿಂದೂ ಮತ್ತು ಮುಸ್ಲಿಂ ಪ್ರಜೆಗಳ ನಡುವೆ ದ್ವೇಷದ ಭಾವನೆ ಇನ್ನೂ ಹೆಚ್ಚಾಗುತ್ತದೆ.