ಕನ್ನಡ ಆಡಳಿತ ಭಾಷೆಯಾಗಿ ಹಲವು ದಶಕಗಳು ಕಳೆದಿದ್ದರೂ ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡದಲ್ಲಿ ವ್ಯವಹಾರ ನಡೆಯುತ್ತಿಲ್ಲ ಎಂದರೆ ರಾಜ್ಯ ಸರ್ಕಾರಕ್ಕೆ ಕನ್ನಡದ ಬಗೆಗೆ ಕಾಳಜಿಯಾಗಲೀ ಬದ್ಧತೆಯಾಗಲೀ ಇಲ್ಲವೆಂದೇ ಅರ್ಥವಲ್ಲವೆ? ಹಿಜಾಬ್– ಕೇಸರಿ ಶಾಲಿನ ಬಗ್ಗೆ ಅತ್ಯುತ್ಸಾಹದಿಂದಲೂ ಆವೇಶದಿಂದಲೂ ಮಾತನಾಡುವ ಮಂತ್ರಿಮಹೋದಯರು, ಪ್ರತಿಪಕ್ಷಗಳ ಮುಖಂಡರು ಕನ್ನಡದ ಕಡೆಗಣನೆಯ ಬಗೆಗೆ ಯಾಕೆ ಧ್ವನಿ ಎತ್ತುತ್ತಿಲ್ಲ?