‘ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಹೀಗಾಗಿ, ಪ್ರಶಸ್ತಿ ಕೊಡಿ ಎಂದು ಇನ್ನು ಮುಂದೆ ಯಾರೂ ಸ್ವವಿವರ ಸಹಿತ ಅರ್ಜಿ ಸಲ್ಲಿಸಬೇಕಿಲ್ಲ. ಆಯ್ಕೆ ಸಮಿತಿ ತಾನೇ ಶೋಧಿಸಿ, ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ಪ್ರಶಸ್ತಿಗೆ ಕನಿಷ್ಠ 60 ವರ್ಷ ಆಗಿರಬೇಕೆಂಬ ನಿರ್ಬಂಧ ಸಡಿಲಿಸಲು ಪ್ರಯತ್ನಿಸುವುದಾಗಿ ಕೂಡಾ ಹೇಳಿದ್ದಾರೆ.