ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೀನಾಯ ಸೋಲನುಭವಿಸಿದ ಜೆಡಿಎಸ್ ವರ್ತನೆ ಯಾರ ಮಗುವನ್ನೋ ಬಾವಿಗೆ ತಳ್ಳಿ ಆಳ ನೋಡುವಂತಿತ್ತು. ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸುವ ನಿಜವಾದ ಕಳಕಳಿಯಿದ್ದರೆ ಹಾಸನದಲ್ಲೋ ಮಂಡ್ಯದಲ್ಲೋ ಟಿಕೆಟ್ ನೀಡಿ ಗೆಲ್ಲಿಸಬಹುದಲ್ಲ. ಜೆಡಿಎಸ್ ಸ್ಪರ್ಧಿಸಿದ್ದು ತಾನು ಗೆಲ್ಲಬೇಕೆಂದಲ್ಲ, ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಸೋಲಬೇಕೆಂದು. ಇದಕ್ಕಾಗಿ ಹತ್ತು ದಿನ ಅವಿರತ ಪ್ರಚಾರ!