ಸಾರ್ವಜನಿಕವಾಗಿ ನಾಲಗೆ ಹರಿಬಿಟ್ಟು, ತಾನು ಮಾತ್ರ ಬುದ್ಧಿವಂತ, ಬೇರೆಯವರೆಲ್ಲರೂ ಮೂರ್ಖರೆಂಬಂತೆ ಸಡಿಲವಾಗಿ ಮಾತಾಡುವುದು ಪ್ರಜ್ಞಾವಂತ ಮತದಾರರ ಗಮನಕ್ಕೆ ಬರುವುದಿಲ್ಲವೇ? ಮಾತು ಮಾತಿಗೆ ‘ಇವರ ಬಂಡವಾಳ ಬಯಲು ಮಾಡುತ್ತೇನೆ’ ‘ಅವರ ಜಾತಕ ಬಿಚ್ಚಿಡುತ್ತೇನೆ’ ಎಂದೆಲ್ಲ ಹೇಳುತ್ತಾ ಕೊನೆಗೆ ಮೌನವಾಗಿರುವುದನ್ನು ನೋಡಿ ನೋಡಿ ಜನರಿಗೂ ಸಾಕಾಗಿದೆ ಎಂಬ ಕಟು ಸತ್ಯ ಅರ್ಥಮಾಡಿಕೊಳ್ಳಬೇಕಾಗಿದೆ. ಇಲ್ಲವಾದರೆ ಫೀನಿಕ್ಸ್ ಹಕ್ಕಿಯಂತೆ ಎದ್ದು ಬರುತ್ತೇವೆ ಎಂಬುದು ಬರೀ ನಾಟಕೀಯ ಸಂಭಾಷಣೆಯಾದೀತು.