ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಹಿಳಾ ಜಯಂತಿ ಆಚರಣೆ ಏಕಿಲ್ಲ ಎಂದು ಸುಮಾ ಅವರು ಪ್ರಶ್ನಿಸಿರುವುದು (ವಾ.ವಾ., ಫೆ. 26) ಸರಿಯಾಗಿಯೇ ಇದೆ. ಈವರೆಗೆ ಆಗಿರುವ ಎಂಬತ್ತಕ್ಕೂ ಅಧಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನದ ಅಧ್ಯಕ್ಷ ಗಾದಿಗೆ ಏರಿದವರು ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ. ಹಾಗೆಯೇ ಕಸಾಪ ಈಗ ಐವರ ಜಯಂತಿ ಆಚರಣೆಯನ್ನು ಮಾಡಹೊರಟಿರುವುದು ಸ್ವಾಗತಾರ್ಹ. ಜೊತೆಗೆ ಕನ್ನಡದ ಮೊದಲ ಲೇಖಕಿ ಅಕ್ಕಮಹಾದೇವಿ ಅವರಂತಹ ಕವಯತ್ರಿಯರ ದಿನಾಚರಣೆಯನ್ನೂ ಮಾಡಲಿ.