‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ. ಆ ಕೆರೆಗಳಿಗೆ ಹಿಂದಿನ ವೈಭವವನ್ನು ಮರಳಿಸುತ್ತೇವೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 11). ನ್ಯಾಯ ಕೊಡಿಸಲು ಅಥವಾ ಅನ್ಯಾಯ ಎಸಗಿದವರನ್ನು ಜೈಲಿಗೆ ಕಳಿಸಲು ಅಧಿಕಾರವೇ ಬೇಕೆ? ಜನಸಾಮಾನ್ಯರಿಗಿಂತ ಜನಪ್ರತಿನಿಧಿಗಳಿಗೆ, ಮಾಜಿ ಮಂತ್ರಿಗಳಿಗೆ, ಮಾಜಿ ಮುಖ್ಯಮಂತ್ರಿಗಳಿಗೆ ಎಲ್ಲ ದಾಖಲೆಗಳೂ ಸುಲಭವಾಗಿ ದೊರಕುತ್ತವೆ. ಅವುಗಳನ್ನು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ನೀಡಿ ಸಂಘಟಿತ ಹೋರಾಟ ಮಾಡುವ ಮೂಲಕ ಒತ್ತಡ ತಂದರೆ, ಕೆರೆಗಳ ವೈಭವ ತಂತಾನೇ ಮರುಕಳಿಸುತ್ತದೆ. ಒಬ್ಬ ಜನಸಾಮಾನ್ಯನಾಗಿಯೂ ಇದನ್ನು ಮಾಡಬಹುದು.