ನಂಜನಗೂಡಿನಿಂದ ಗುಂಡ್ಲುಪೇಟೆವರೆಗಿನ ಸರಳರೇಖೆಯ ಈ ಹೆದ್ದಾರಿಯ ಉದ್ದಕ್ಕೂ ಎಡ-ಬಲಗಳಲ್ಲಿ ಹಲವಾರು ಹಳ್ಳಿಗಳ ಸಂಪರ್ಕ ರಸ್ತೆಗಳಿವೆ. ಇಲ್ಲಿ ಸೂಕ್ತ ಸಂಚಾರ ನಿಯಮ ಫಲಕಗಳನ್ನು ಹಾಕಬೇಕು. ಬೇಗೂರು ಗ್ರಾಮವು ಆ ಭಾಗದ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು, ಹೆದ್ದಾರಿಯು ಈ ಪಟ್ಟಣದ ಮುಖ್ಯ ವಾಣಿಜ್ಯ ರಸ್ತೆಯೂ ಆಗಿರುವುದು ಸದಾ ಅಪಘಾತಕ್ಕೆ ತೆರೆದಂತಿದೆ. ಇಲ್ಲಿ ಸೂಕ್ತ ಪಾದಚಾರಿ ದಾಟು ರಸ್ತೆ ಮಾಡಬೇಕು. ಎಲ್ಲೆಂದರಲ್ಲಿ ರಸ್ತೆ ದಾಟದಂತೆ ಬ್ಯಾರಿಕೇಡ್ ಹಾಕಬೇಕು.