ನಮ್ಮ ಹುಬ್ಬಳ್ಳಿ– ಧಾರವಾಡಕ್ಕೆ ಅವರು ಅನೇಕ ಸಾರಿ ಬಂದು ತಮ್ಮ ಸಂತೂರ್ ಸವಿಯನ್ನು ನಮಗೆಲ್ಲ ಉಣಿಸಿದ್ದಾರೆ. ಅಂತೆಯೇ ವೇದಿಕೆಯ ಮೇಲೆ ಅವರ ಶಿಸ್ತು, ಸಂಯಮ ಮತ್ತು ತಾಳ್ಮೆ ಅಭಿನಂದನೀಯ. ಅಂಥ ಮಹಾನ್ ಕಲಾವಿದ ಜನಿಸುವುದು ದುರ್ಲಭ. ನಾವೆಲ್ಲರೂ ಅವರನ್ನು ನೋಡಿದ್ದೇವೆ ಮತ್ತು ಅವರ ಸಂತೂರ್ ವಾದನವನ್ನು ಆಲಿಸಿದ್ದೇವೆ ಎಂಬುದೇ ನಮ್ಮ ಪುಣ್ಯ.