ಪುನೀತ್ ರಾಜ್ಕುಮಾರ್ ಅವರು ನಿಧನರಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ಒಂದಿಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಾಗ, ಕುವೆಂಪು ಅವರ ಈ ಸಾಲುಗಳು ನೆನಪಾದವು– ‘ಶೋಕವಿರುವುದು ಪ್ರದರ್ಶನ ಕ್ಕಾಗಿಯೇ? ಆತನಿಗೆ ಸಂತೋಷವಾಗುವ ರೀತಿಯಲ್ಲಿ ಬಾಳಿದರೆ ಆತನು ನಮಗೆ ದೊರಕದೆ ಹೋದಾನೇ?’ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಆತ್ಮಹತ್ಯೆಯೊಂದೇ ಮಾರ್ಗವೇ?