‘ಪರಂಪರೆಯ ಭಂಡಾರಕ್ಕೆ ಕೀಲಿಕೈ’ ಎಂಬ ಯೋಗಾನಂದ ಅವರ ಲೇಖನವನ್ನು (ಸಂಗತ, ಆ. 24)
ಓದಿ, ಸಂಸ್ಕೃತದ ಬಗ್ಗೆ ನಾನು ಆತ್ಮಾವಲೋಕನ ಮಾಡಿಕೊಂಡೆ. ಕಳೆದ ವಾರ ಚಂದನ ವಾಹಿನಿಯನ್ನು ವೀಕ್ಷಿಸುತ್ತಿದ್ದಾಗ, ವಾರ್ತೆಯು ಸಂಸ್ಕೃತದಲ್ಲಿ ಪ್ರಸಾರವಾಗುತ್ತಿತ್ತು. ನನಗೆ ಆಶ್ಚರ್ಯ. ಸಂಸ್ಕೃತದ ಬಗ್ಗೆ ಅಲ್ಪ ಜ್ಞಾನವಿದ್ದ ಕಾರಣ ಅದು ನನಗೆ ಮನನವಾಯಿತು. ಆದರೆ ನಮ್ಮ ತಾಯಿ, ‘ಅದು ಯಾವ ಭಾಷೆ’ ಎಂದು ಕೇಳಿದರು! ಇದು ನಮ್ಮ ಪಾರಂಪರಿಕ ಭಾಷೆಯ ಅವನತಿಗೆ ಹಿಡಿದ ಕೈಗನ್ನಡಿಯಾಗಿದೆ. ಸಂಸ್ಕೃತ ಮೃತ ಭಾಷೆಯಾಗಿಲ್ಲ, ನನ್ನ ಪ್ರಕಾರ ಮಿತ ಭಾಷೆಯಾಗಿದೆ.