‘ಸಂಪುಟ ವಿಸ್ತರಣೆ: ಅಲೆದಾಡಿಸುವುದೇಕೆ?’ ಎಂಬ ಪ್ರಶ್ನೆಯನ್ನು ರಮಾನಂದ ಶರ್ಮಾ ತಮ್ಮ ಪತ್ರದಲ್ಲಿ ಕೇಳಿದ್ದಾರೆ (ವಾ.ವಾ., ಜುಲೈ 27). ಮುಖ್ಯಮಂತ್ರಿ ಆಯ್ಕೆ– ನೇಮಕ, ಸಂಪುಟ ರಚನೆ– ವಿಸ್ತರಣೆಯಲ್ಲಿಪಕ್ಷದ ವರಿಷ್ಠ ಮಂಡಳಿ ಅಥವಾ ಹೈಕಮಾಂಡ್ ಎನ್ನುವ ವ್ಯವಸ್ಥೆಗೆ ಯಾವ ಪಾತ್ರವೂ ಇಲ್ಲ. ಆದರೆ, ವಾಸ್ತವವೇ ಬೇರೆ! ವರಿಷ್ಠ ಮಂಡಳಿ ಎಂಬ ವ್ಯವಸ್ಥೆಗೆ ಎಲ್ಲರೂ ತಮ್ಮ ಸ್ವಂತಿಕೆಯನ್ನು ಒತ್ತೆಯಿಟ್ಟಿರುವುದರಿಂದ ರಾಜ್ಯದ ಮುಖ್ಯಮಂತ್ರಿ ತನ್ನ ಸಚಿವ ಸಂಪುಟ ರಚಿಸುವಲ್ಲಿ ಅಥವಾ ಪುನರ್ರಚನೆ ಮಾಡುವಲ್ಲಿ ವರಿಷ್ಠರ ಮುಂದೆ ಬಾಗಿ, ‘ಜಿಯಾ, ಹಸಾದ’ ಎನ್ನುವ ಸ್ಥಿತಿ, ವರಿಷ್ಠರ ಮರ್ಜಿಗೆ ಕಾಯುವ ಅನಿವಾರ್ಯ. ಆದರೆ, ಆ ಮಂಡಳಿಯ ಲೆಕ್ಕಾಚಾರವೇ ಬೇರೆ.