ಅದೇ ದಿನ (ಪ್ರ.ವಾ., ಸೆ. 25) ‘ಭೇದ ಭಾವದ ಧರ್ಮ ಬೇಕಿಲ್ಲ’ ಎಂಬ ಶೀರ್ಷಿಕೆಯಡಿಪ್ರಕಟವಾದ ವರದಿಯಲ್ಲಿ, ‘ಯಾವ ದೇವರೂ ಬೇಡ, ಯಾವ ದೇವಸ್ಥಾನವೂ ಅಗತ್ಯವಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಫುಲೆ ಮತ್ತು ಕುವೆಂಪು ಹೇಳಿರುವ ಸಮಾನತೆ, ನ್ಯಾಯ ಹಾಗೂ ವೈಜ್ಞಾನಿಕ ಮನೋಭಾವ ಬೇಕಿದೆ’ ಎಂದು ಹೇಳಿರುವ ನಟ ಚೇತನ್ ಅಹಿಂಸಾ ಅವರ ಮಾತು ಸಾಂದರ್ಭಿಕವಾಗಿದೆ. ಭೇದಭಾವ ಮಾಡಿದವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಶಯ.