ನಮ್ಮ ಜೊತೆಗೆ ಇದ್ದ ಸಹಪ್ರಯಾಣಿಕರೊಬ್ಬರು, ‘ಅಣ್ಣಾ, ಕೆಲವೊಮ್ಮೆ ರಾತ್ರಿ ಉಳಿದವುಗಳನ್ನು ಬೆಳಿಗ್ಗೆ ಮಾರುತ್ತಾರೆ. ಬೆಳಿಗ್ಗೆ ಮಾಡಿದ್ದನ್ನು ಸಂಜೆಯವರೆಗೂ ಮಾರುತ್ತಾರೆ. ಒಮ್ಮೊಮ್ಮೆ 30, 20 ರೂಪಾಯಿಗೂ ಮಾರುತ್ತಾರೆ ಎಂದು ಹೇಳಿದರು. ಆಹಾರ ಪದಾರ್ಥ ಉಳಿದಿದೆ ಎಂದ ಮಾತ್ರಕ್ಕೆ ಪ್ರಯಾಣಿಕರ ಆರೋಗ್ಯ ಮತ್ತು ಹಿತದೃಷ್ಟಿಯಿಂದ ಯಾವಾಗ ಬೇಕೋ ಆಗ ಮಾರುವುದು ಸೂಕ್ತವಲ್ಲ. ಇದರಿಂದ, ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡುವಂತಾಗಿದೆ. ಜೊತೆಗೆ ರೈಲ್ವೆ ಇಲಾಖೆಯ ಮಾನ ಕೂಡ ಹರಾಜಾಗುತ್ತಿದೆ. ಭವಿಷ್ಯದಲ್ಲಿ ಈ ಪ್ರಕ್ರಿಯೆ ಹೀಗೇ ಮುಂದುವರಿದರೆ, ರೈಲಿನಲ್ಲಿ ಕೊಂಡು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಗಂಭೀರ ಚಿಂತನೆ ನಡೆಸಬೇಕಾಗಿದೆ.