ರಾಜ್ಯ ವಿಧಾನಸಭೆ ಚುನಾವಣೆಗೆ ಏಳೆಂಟು ತಿಂಗಳಷ್ಟೇ ಉಳಿದಿದೆ. ಮುಂದಿನ ಚುನಾವಣೆಯಲ್ಲಿ ಬಹುಮತ ದೊರೆತರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳುಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬೂದಿ ಮುಚ್ಚಿದ ಕೆಂಡದಂತೆ ಕಂಡಂತೆ, ಕಾಣದಂತೆ ಇದ್ದೇ ಇವೆ. ಆದರೆ ನಿಜಕ್ಕೂ ಸ್ಪಷ್ಟತೆ ಇರ ಬೇಕಾದುದು ಮತದಾರರಲ್ಲಿ. ಅತಂತ್ರ ವಿಧಾನಸಭೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಮತದಾರರ ಮೇಲಿದೆ. ರಾಷ್ಟ್ರದ ಏಕತೆ, ರಾಜ್ಯದ ಬಗೆಗೆ ಕಳಕಳಿ, ಸ್ಪಷ್ಟ ಸಾಂಸ್ಕೃತಿಕ ನೀತಿಯ ಹಿತವರಿತ ಪಕ್ಷಕ್ಕೆ ಪೂರ್ಣ ಬಹುಮತ ನೀಡಬೇಕು. ಈ ಲೆಕ್ಕಾಚಾರದಲ್ಲಿ ರಾಜ್ಯದ ಜನರ ಚಿತ್ತ ದೃಢವಾಗಬೇಕಾಗಿದೆ.