ಹೆಚ್ಚುತ್ತಿರುವ ನಗರೀಕರಣವು ಪರಿಸರಕ್ಕೆ ಗಂಭೀರ ಅಪಾಯ ತಂದೊಡ್ಡುತ್ತಿದೆ. ನಗರಗಳಲ್ಲಿ ಹಸಿರು ದಿನೇ ದಿನೇ ಕಣ್ಮರೆಯಾಗುತ್ತಿರುವುದೇ ಇದಕ್ಕೆ ಕಾರಣ. ಇದನ್ನು ತಡೆಯುವುದು ಅಗತ್ಯ. ಜಾರ್ಖಂಡ್ ರಾಜ್ಯ ಸರ್ಕಾರವು ಮರಗಳನ್ನು ಬೆಳೆಸಿದವರಿಗೆ ಐದು ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪೂರೈಸುವುದಾಗಿ ಘೋಷಿಸಿದೆ. ಇದು ಅನುಕರಣೀಯ ಮಾದರಿ. ನಮ್ಮ ರಾಜ್ಯ ಸರ್ಕಾರ ಕೂಡ ಈ ದಿಸೆಯಲ್ಲಿ ಯೋಚಿಸಬೇಕು.