ರಾಜ್ಯದ ಕೆಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನು ಕೆಲವು ಸುದ್ದಿ ಮಾಧ್ಯಮಗಳು ಜಲಾಸುರ, ಜಲರಾಕ್ಷಸ, ವರುಣಾಸುರ ಎಂದೆಲ್ಲ ಕರೆಯುತ್ತಿವೆ. ಇದು ಸರಿ ಎನಿಸುವುದಿಲ್ಲ. ನೀರು, ನದಿಗಳು ಎಂದಿದ್ದರೂ ಸಕಲ ಜೀವರಾಶಿಗಳಿಗೆ ದೈವ ಸ್ವರೂಪ. ಮಹಾಮಳೆಗೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ. ಇದರಿಂದಾಗಿ ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ ಉಂಟಾಗುತ್ತದೆ.