ನ್ಯಾಯವಾದ ಹಾದಿಯಲ್ಲಿ ದುಡಿಯುವ ವ್ಯವಧಾನ ಯಾರಲ್ಲೂ ಇಲ್ಲ. ಇದರಿಂದಾಗಿ ಕೊಲೆ, ಸುಲಿಗೆ, ಮೋಸ, ವಂಚನೆ, ಕಳ್ಳತನ... ಎಗ್ಗಿಲ್ಲದೆ ನಡೆಯುತ್ತಿವೆ. ಈ ಎಲ್ಲದರ ಹಿಂದೆ, ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕಿದ ಬಂಡವಾಳಶಾಹಿ ರಾಕ್ಷಸರು ಕೇಕೆ ಹಾಕಿ ಅಟ್ಟಹಾಸಗೈಯುತ್ತಿದ್ದಾರೆ. ಎಲ್ಲರಲ್ಲೂ ಇಂಥ ಮನಸ್ಥಿತಿ ಗಟ್ಟಿಯಾಗುತ್ತಿರುವಾಗ ರಾಜಕಾರಣಿಗಳಾದರೂ ಏನು ಮಾಡಬೇಕು?