ಧರ್ಮ, ಜನಾಂಗ, ಜಾತಿ, ಪಂಗಡದ ಹೆಸರಿನಲ್ಲಿ ಜನರು ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ದ್ವೇಷಿಸುತ್ತಾ, ಕೊಲೆ, ರಕ್ತಪಾತಗಳಿಗೆ ಕಾರಣ
ವಾಗುತ್ತಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ, ಎಲ್ಲರೂ ಒಟ್ಟಾಗಿ ಸಮೃದ್ಧಿಯತ್ತ ಸಾಗೋಣ ಎಂಬ ಗುರು ಬ್ರಹ್ಮವಿಹಾರಿ ಸ್ವಾಮಿ ಅವರ ಪ್ರತಿಪಾದನೆ ಸಕಾಲಿಕ. ನಾವು ಜೊತೆಯಾಗಿ ಭವಿಷ್ಯ ಕಟ್ಟುತ್ತೇವೆ ಎಂಬ ಪೋಪ್ ಫ್ರಾನ್ಸಿಸ್ ಅವರ ಚಿಂತನೆ ವಿಶ್ವ ಏಕತೆ, ಧಾರ್ಮಿಕ ಸಹಿಷ್ಣುತೆ, ಕೋಮು ಸೌಹಾರ್ದಕ್ಕೆ ಮೂಲಾಧಾರವಾಗಿದೆ.