ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಮೇಲೆ ಉಪ್ಪು ಸವರಿದಂತಾಗಿದೆ

Last Updated 10 ಸೆಪ್ಟೆಂಬರ್ 2020, 17:27 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಪರಿಣಾಮದಿಂದ ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಉದ್ಯಮದವರೆಗೆ ಎಲ್ಲರಿಗೂ ಆರ್ಥಿಕ ನಷ್ಟವಾಗಿದೆ. ಆದರೆ ಈ ನಷ್ಟವನ್ನು ಈಗಿನ ಅನ್‌ಲಾಕ್‌ ಸಂದರ್ಭದಲ್ಲಿ ತುಂಬಿಕೊಳ್ಳುವ ಸಲುವಾಗಿ, ಎಲ್ಲರೂ ಮೊದಲಿದ್ದ ಮೂಲಬೆಲೆಯನ್ನು ಹೆಚ್ಚಿಸಿದ್ದಾರೆ. ಇದು ಬಡತನವೆಂಬ ಗಾಯಕ್ಕೆ ಉಪ್ಪು ಸುರಿದಂತಿದೆ.

ಬಹಳಷ್ಟು ಬಡ ಕುಟುಂಬಗಳು ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿವೆ. ಲಾಕ್‌ಡೌನ್‌ ಮುಂಚೆ ಸಿಗುತ್ತಿದ್ದ ಕೂಲಿಯ ಮೊತ್ತದಲ್ಲಿ ಈಗಲೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಈ ಸಂದರ್ಭದಲ್ಲಿ ದವಸಧಾನ್ಯ ಒಳಗೊಂಡಂತೆ ಬೇರೆ ಎಲ್ಲ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದರಿಂದ ಅವರ ಜೀವನ ನಿರ್ವಹಣೆ ಮೇಲೆ ಹೊಡೆತ ಬಿದ್ದಿದೆ. ಬಡವರ ಬದುಕಿಗೆ ಆಸರೆಯಾಗುವ ಕಾರ್ಯಕ್ರಮಗಳ ಕುರಿತು ಸರ್ಕಾರ ಚಿಂತಿಸಲಿ.

- ನಾರಾಯಣ ಡಂಬಳಿ,ಕೋಹಳ್ಳಿ, ಅಥಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT