ದೇಶದ ಪ್ರತೀ ಹತ್ತರಲ್ಲಿ ಒಬ್ಬರ ಉದ್ಯೋಗಕ್ಕೆ ಕುತ್ತು ಬರಲಿದೆ ಎಂಬ ವರದಿಯು (ಪ್ರ.ವಾ., ಏ. 29) ಲಾಕ್ಡೌನ್ ತೆರವಿನ ತರುವಾಯ ಎದುರಿಸಲೇಬೇಕಾದ ದೊಡ್ಡ ಸವಾಲಿನ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ಮುಖ್ಯವಾಗಿ, ದೊಡ್ಡ ಪ್ರಮಾಣದ ಅಸಂಘಟಿತ ವಲಯದಲ್ಲಿ ತಲೆದೋರುವ ಈ ಸವಾಲನ್ನು ಸ್ವೀಕರಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದಾದಿಯಾಗಿ ಎಲ್ಲರೂ ಸಿದ್ಧರಾಗಬೇಕಿದೆ. ಅರ್ಥವ್ಯವಸ್ಥೆಯು ಮರಳಿ ಹಳಿಯನ್ನು ತಲುಪುವವರೆಗೆ ಜೀವನೋಪಾಯಕ್ಕಾಗಿ ಯಾವುದಾದರೂ ವೃತ್ತಿಯನ್ನು ಕಂಡುಕೊಳ್ಳಬೇಕಾದ ಚಿಂತನೆಯು ಈಗಿನಿಂದಲೇ ನಡೆದರೆ ಉತ್ತಮ.