ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಪ್ರಬುದ್ಧ ನಿಲುವಿರಲಿ

Last Updated 9 ಆಗಸ್ಟ್ 2021, 18:33 IST
ಅಕ್ಷರ ಗಾತ್ರ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ವಾರಾಂತ್ಯದ ಲಾಕ್‍ಡೌನ್ ಜಾರಿಗೊಳಿಸಿರುವುದು ಅನಿವಾರ್ಯವೇನೂ ಆಗಿರಲಿಲ್ಲ. ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಕೋವಿಡ್ ರೋಗಲಕ್ಷಣಗಳು ಹೆಚ್ಚಿರುವುದರಿಂದ ಆ ಭಾಗದ ಗಡಿ ಭದ್ರತೆಯನ್ನು ಅತ್ಯಂತ ಕಠಿಣವಾಗಿ ನಿರ್ವಹಿಸಿದರಷ್ಟೇ ಸಾಕಾಗಿತ್ತು. ವಾರಾಂತ್ಯದ ಎರಡು ದಿನಗಳಲ್ಲಿ, ನೆರೆ ರಾಜ್ಯಗಳೊಂದಿ‌ಗಿನ ಗಡಿ ಪ್ರವೇಶ ದ್ವಾರಗಳನ್ನು ಬಂದ್ ಮಾಡಬಹುದಾಗಿತ್ತು. ಅದುಬಿಟ್ಟು ಈ ಜಿಲ್ಲೆಗಳನ್ನು ವಾರಾಂತ್ಯದ ಲಾಕ್‍ಡೌನ್‍ಗೆ ಒಳಪಡಿಸಿರುವುದರಿಂದ, ಇದೀಗ ತಾನೆ ಚೇತರಿಸಿಕೊಳ್ಳುತ್ತಿರುವ ಇಲ್ಲಿನ ವ್ಯಾಪಾರ-ವಹಿವಾಟಿಗೆ, ಜನಜೀವನಕ್ಕೆ ಇನ್ನಷ್ಟು ಹೊಡೆತ ಕೊಟ್ಟಂತಾಗಿದೆ. ಆಡಳಿತವರ್ಗ ಪ್ರಬುದ್ಧತೆ ತೋರಲಿ.

ಹೊರೆಯಾಲ ದೊರೆಸ್ವಾಮಿ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT