ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ವಾರಾಂತ್ಯದ ಲಾಕ್ಡೌನ್ ಜಾರಿಗೊಳಿಸಿರುವುದು ಅನಿವಾರ್ಯವೇನೂ ಆಗಿರಲಿಲ್ಲ. ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಕೋವಿಡ್ ರೋಗಲಕ್ಷಣಗಳು ಹೆಚ್ಚಿರುವುದರಿಂದ ಆ ಭಾಗದ ಗಡಿ ಭದ್ರತೆಯನ್ನು ಅತ್ಯಂತ ಕಠಿಣವಾಗಿ ನಿರ್ವಹಿಸಿದರಷ್ಟೇ ಸಾಕಾಗಿತ್ತು. ವಾರಾಂತ್ಯದ ಎರಡು ದಿನಗಳಲ್ಲಿ, ನೆರೆ ರಾಜ್ಯಗಳೊಂದಿಗಿನ ಗಡಿ ಪ್ರವೇಶ ದ್ವಾರಗಳನ್ನು ಬಂದ್ ಮಾಡಬಹುದಾಗಿತ್ತು. ಅದುಬಿಟ್ಟು ಈ ಜಿಲ್ಲೆಗಳನ್ನು ವಾರಾಂತ್ಯದ ಲಾಕ್ಡೌನ್ಗೆ ಒಳಪಡಿಸಿರುವುದರಿಂದ, ಇದೀಗ ತಾನೆ ಚೇತರಿಸಿಕೊಳ್ಳುತ್ತಿರುವ ಇಲ್ಲಿನ ವ್ಯಾಪಾರ-ವಹಿವಾಟಿಗೆ, ಜನಜೀವನಕ್ಕೆ ಇನ್ನಷ್ಟು ಹೊಡೆತ ಕೊಟ್ಟಂತಾಗಿದೆ. ಆಡಳಿತವರ್ಗ ಪ್ರಬುದ್ಧತೆ ತೋರಲಿ.