ಲಾಕ್ಡೌನ್ನಿಂದಾಗಿ ದಿನಸಿ ಪದಾರ್ಥಗಳ ಬೆಲೆ ಯರ್ರಾಬಿರ್ರಿ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಇದರಿಂದಾಗಿ ಗಾಯದ ಮೇಲೆ ಬರೆ ಹಾಕಿದಂತಾಗಿದೆ.
ದಿನಸಿ ಪದಾರ್ಥಗಳ ದರಪಟ್ಟಿಯನ್ನು ಚಿಲ್ಲರೆ ಅಂಗಡಿಗಳ ಮುಂದೆ ಪ್ರಕಟಿಸುವಂತೆ ಸಂಬಂಧಪಟ್ಟವರು ಸೂಚಿಸಬೇಕು. ಇಂತಹ ಕ್ರಮದಿಂದ, ಕೆಲವರು ದುಪ್ಪಟ್ಟು ಬೆಲೆಗೆ ಮಾರುವುದನ್ನು ತಪ್ಪಿಸಬಹುದು ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹ ಸಾಧ್ಯವಾಗುತ್ತದೆ.