‘ಚುನಾವಣೆಯ ಕಾಲದ ರಾಜಕೀಯ ನಿರ್ವಾತ’ ಲೇಖನದಲ್ಲಿ (ಪ್ರ.ವಾ., ಮಾರ್ಚ್ 19) ನಾರಾಯಣ ಅವರು ಬಿಜೆಪಿಯ ‘ಅಪಾಯಕಾರಿ, ಯಾಂತ್ರಿಕ ದಕ್ಷತೆ’ ಮತ್ತು ಕಾಂಗ್ರೆಸ್ಸಿನ ‘ಉದಾಸೀನ, ಎಡಬಿಡಂಗಿತನ’– ಈ ಎರಡೂ ಅಪಾಯಗಳಿಂದ ಬಿಡುಗಡೆ ಅಗತ್ಯವೆಂದು ದೃಢವಾಗಿ ಪ್ರತಿಪಾದಿಸಿದ್ದಾರೆ.ಆದರೆ ಇವೆರಡೇ ಪಕ್ಷಗಳಲ್ಲದೆ ಪ್ರಾದೇಶಿಕ ಪಕ್ಷಗಳೂ ಇವೆ. ಅವು ಒಂದೊಂದೂ ಒಂದೊಂದು ದಿಕ್ಕಿನತ್ತ ಮುಖ ಮಾಡಿದ್ದರೂ ಕೇಂದ್ರದಲ್ಲಿ ಅಧಿಕಾರಗ್ರಹಣಕ್ಕಾಗಿ ಒಟ್ಟಾಗಬೇಕೆಂದುಹಾತೊರೆಯುತ್ತಿವೆ. ಈ ಪಕ್ಷಗಳೂಒಂದಿಲ್ಲೊಂದು ರೀತಿಯಲ್ಲಿ ಎರಡು ಪ್ರಮುಖ ಪಕ್ಷಗಳ ಛಾಯಾನುವರ್ತಿಗಳೇ.