ಕುಡಿಯುವ ನೀರಿನ ಬವಣೆ ನಿವಾರಣೆಯಂತಹ ಅಗತ್ಯ ಕೆಲಸಗಳಿಗೆ ಸಂಬಂಧಿಸಿದ ನೀತಿ–ನಿರ್ಧಾರಗಳಿಗೆ ಅವಕಾಶ ಇರಬೇಕು. ಚುನಾವಣಾ ಆಯೋಗವು ಇಂತಹ ಕೆಲಸಗಳಿಗೆ ನೀತಿ ಸಂಹಿತೆಯ ಚೌಕಟ್ಟಿನಿಂದ ರಿಯಾಯಿತಿ ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಚುನಾವಣೆ ಘೋಷಣೆಯ ದಿನದಿಂದ ಫಲಿತಾಂಶ ಪ್ರಕಟವಾಗುವವರೆಗೆ ಜನಸಾಮಾನ್ಯರು ಆಗಬೇಕಾದ ಕೆಲಸಗಳಿಗೆ ಕಾಯುತ್ತಿರಬೇಕಾದ ಅನಿವಾರ್ಯ ಎದುರಾಗುತ್ತದೆ.