ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಒಳಗಾಗುವವರು ಎಲ್ಲೆಡೆ ಇದ್ದಾರೆ

Last Updated 29 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಸಂದರ್ಭದಲ್ಲಿ ಮದ್ಯ ನಿಷೇಧವನ್ನು ಜಾರಿಗೊಳಿಸಿದ ಬಗ್ಗೆ ಬಿಂಡಿಗನವಿಲೆ ಭಗವಾನ್‌ ವಿಷಾದ ವ್ಯಕ್ತಪಡಿಸಿದ್ದಾರೆ (ವಾ.ವಾ., ಅ. 29). ಶಿಕ್ಷಕರು ಮದ್ಯದ ಆಮಿಷಕ್ಕೆ ಒಳಗಾಗುವವರಲ್ಲ ಎಂದು ಅವರು ನಂಬಿದ್ದಾರೆ. ಆದರೆ ಎಲ್ಲ ಇಲಾಖೆಗಳಲ್ಲೂ ಇರುವ ಹಾಗೆ ಶಿಕ್ಷಣ ಇಲಾಖೆಯಲ್ಲೂ ಕುಡುಕರುಇದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಲು ವೇದಿಕೆ ಏರಿದ ಶಿಕ್ಷಕರೊಬ್ಬರ ಕುಡುಕತನ ಅಲ್ಲೇ ಬಯಲಾಗಿತ್ತು. ಕಳೆದ ಬಾರಿ ಇದೇ ಚುನಾವಣೆಯಲ್ಲಿ ಕುಡುಕ ಮತದಾರರ ನಡುವೆ ಮಾರಾಮಾರಿಯಾಗಿತ್ತು. ಇಂತಹ ಕ್ವಚಿತ್ ಘಟನೆಗಳಿದ್ದರೂ ಸರ್ಕಾರದ ಮುಂದಾಲೋಚನೆ ಸರಿ ಎನಿಸುತ್ತದೆ.

ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT