ಇದೀಗ, ಶಿಂಧೆ ಅವರೇ ಚುಕ್ಕಾಣಿ ಹಿಡಿಯಲಿದ್ದಾರೆ. ಕಹಿ ಪ್ರಸಂಗಗಳನ್ನು ಮರೆತು, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ನಡೆಯಲಿ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ವಿಷಯದಲ್ಲಿ ಅನಗತ್ಯ ಕಿರಿಕಿರಿ ಹೆಚ್ಚಾಗಿತ್ತು. ಸರ್ಕಾರದಲ್ಲಿ ಈಗ ಬಿಜೆಪಿ ಪಾಲುದಾರ ಪಕ್ಷ ಆಗುವುದರಿಂದ ಈ ಕಿರಿಕಿರಿ ನಿವಾರಣೆ ಆಗಬಹುದು. ಏಕೆಂದರೆ, ಎರಡೂ ಕಡೆ ಅದೇ ಪಕ್ಷ ಆಡಳಿದಲ್ಲಿ ಇರುವುದರಿಂದ ತಕರಾರು ಸಹಜವಾಗಿಯೇ ತಪ್ಪಬಹುದು.