ಮಹಾರಾಷ್ಟ್ರದ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್ ಸಿಂಹ ದಿಸಾಳೆ ಅವರು ಪ್ರತಿಷ್ಠಿತ ‘ಗ್ಲೋಬಲ್ ಟೀಚರ್ ಪ್ರೈಜ್’ ಗೌರವಕ್ಕೆ ಪಾತ್ರರಾಗಿರುವುದು ದೇಶದ ಇಡೀ ಪ್ರಾಥಮಿಕ ಶಾಲಾ ಶಿಕ್ಷಕ ಸಮುದಾಯಕ್ಕೆ ಸಂದ ಗೌರವವಾಗಿದೆ. ಅದೂ ಮಕ್ಕಳಿಗೆ ಕನ್ನಡ ಬೋಧಿಸಲು ಅವರು ಅನುಸರಿಸಿದ ಮಾರ್ಗಕ್ಕಾಗಿ ಈ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಎಲ್ಲ ಶಾಲೆಗಳಲ್ಲಿ ಈ ರೀತಿಯ ವಿನೂತನ ಮಾದರಿಯ ಕಲಿಕಾ ಪ್ರಯತ್ನಗಳ ಅಗತ್ಯವಿದೆ. ಕಾರವಾರದ ಗಡಿ ಶಾಲೆಗಳಲ್ಲಿ ಕೊಂಕಣಿ ಭಾಷೆಯ ಮೂಲಕ ಕನ್ನಡ ಕಲಿಸುವುದು, ಬೆಳಗಾವಿಯ ಗಡಿ ಭಾಗದಲ್ಲಿ ಮರಾಠಿ ಮೂಲಕ ಕನ್ನಡ, ಕನ್ನಡದ ಮೂಲಕ ಮರಾಠಿ ಹೇಳಿಕೊಡುವುದು ಅಲ್ಲಲ್ಲಿ ಮೊದಲಿನಿಂದಲೂ ನಡೆಯುತ್ತಿದೆ. ಮಕ್ಕಳ ಮನಸ್ಸು ಮುಟ್ಟಲು ಮತ್ತು ಕಲಿಕೆಯನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಇದು ಅನಿವಾರ್ಯ ಅಗತ್ಯ. ಆಂಧ್ರಪ್ರದೇಶ, ತಮಿಳುನಾಡು ಗಡಿ ಭಾಗಗಳಲ್ಲೂ ತುಳು ಪರಿಸರದಲ್ಲೂ ಈ ಕ್ರಮ ಇರಬಹುದು.