ಈ ಕುರಿತು ಪಿಟಿಐ ಸುದ್ದಿ ಸಂಸ್ಥೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಸೇನಾಧಿಕಾರಿಯಾಗಿದ್ದವ. ಪಾಕಿಸ್ತಾನದ ಪರೋಕ್ಷ ಯುದ್ಧದ ವಿರುದ್ಧ ನಮ್ಮ ಸೇನೆ ಕಾಶ್ಮೀರದಲ್ಲಿ ದೀರ್ಘಾವಧಿಯಿಂದಲೂ ಹೋರಾಡುತ್ತಿದೆ. ಈ ಹೋರಾಟ ನಡೆಸುತ್ತಿರುವ ಸೇನೆಯ ನನ್ನ ಯೋಧರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೆ? ಅವರ ನೈತಿಕ ಸಾಮರ್ಥ್ಯ ಕುಸಿಯಲು ಅವಕಾಶ ನೀಡುವುದಿಲ್ಲ. ಅವರ ಮೇಲೆ ಕಲ್ಲುತೂರಾಟ ನಡೆಸಲು ಅವಕಾಶ ಕೊಡಲು ಸಾಧ್ಯವಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ’ ಎಂದು ಉತ್ತರಿಸಿದ್ದಾರೆ.