ಕೃಷಿ ಜಮೀನಿನ ಮೇಲೆ ವನ್ಯಪ್ರಾಣಿಗಳ ದಾಳಿ ನಿಯಂತ್ರಿಸಲು ಸಮಗ್ರ ದೃಷ್ಟಿಕೋನದ ಪ್ರಯತ್ನಗಳು ಬೇಕು ಎಂಬ ಕೇಶವ ಎಚ್. ಕೊರ್ಸೆ ಅವರ ವಿಚಾರ (ಪ್ರ.ವಾ., ಸೆ. 17) ಯೋಚಿಸುವಂತಹದ್ದು. ಪ್ರಾಣಿಗಳ ನೆಲೆಯನ್ನು ಮನುಷ್ಯ ಅತಿಕ್ರಮಣ ಮಾಡಿದ್ದಾನೆ. ಅವುಗಳಿಗೆ ಕಂದಕ ತೋಡುವುದು, ಅವುಗಳನ್ನು ಉರುಳಿಗೆ ಬೀಳಿಸುವುದು, ಮದ್ದಿಡುವುದು ಇವೆಲ್ಲಾ ಪ್ರಾಣಿಗಳಿಗೆ ನಾವು ಕೊಡುವ ತೊಂದರೆಯೇ ಸರಿ. ಅವುಗಳಿಗೆ ಬದುಕಲು ಜಾಗವಿಲ್ಲದಾದಾಗ ಊರಿಗೆ ನುಗ್ಗುವುದು ಸಹಜ.