ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಸಮಾವೇಶದಿಂದ ಉಪಯೋಗವಿಲ್ಲ

Last Updated 24 ಮಾರ್ಚ್ 2019, 20:36 IST
ಅಕ್ಷರ ಗಾತ್ರ

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜನಬಲ ತೋರಿಸಲು ಅತೀ ಹೆಚ್ಚು ಜನರನ್ನು ಸೇರಿಸುವಂತೆ ಜಿಲ್ಲೆಯ ಶಾಸಕರು ಹಾಗೂ ಕಾರ್ಯಕರ್ತರಿಗೆ ನಾಯಕರ ಆಜ್ಞೆಯಾಗಿದೆಯಂತೆ. ಆದರೆ ಈ ಸಂದರ್ಭದಲ್ಲಿ, ಅಂದು ದುಡಿದು ಅಂದೇ ತಿನ್ನುವ ಸಾಮಾನ್ಯ ವರ್ಗ, ತಳ್ಳುಗಾಡಿ ವ್ಯಾಪಾರಸ್ಥರು, ತುರ್ತು ಚಿಕಿತ್ಸೆ ಸಲುವಾಗಿ ವಾಹನಗಳಲ್ಲಿ ಸಂಚರಿಸುವವರು ಈ ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು, ಅವರಿಗೆ ತೊಂದರೆಯಾಗದ ರೀತಿ ಸಮಾವೇಶ ನಡೆಯಲಿ. ಏಕೆಂದರೆ, ಅದ್ಧೂರಿ ಸಮಾವೇಶಗಳಿಂದ ಇಂತಹ ಬಡಪಾಯಿಗಳಿಗೆ ಹೆಚ್ಚು ತೊಂದರೆಯಾಗುತ್ತದೆಯೇ ಹೊರತು ನಯಾ ಪೈಸೆ ಉಪಯೋಗವಂತೂ ಆಗಲಾರದು.

-ಚೇತನ ಜೈನ್ ಎಸ್.ಎಸ್.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT