ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜನಬಲ ತೋರಿಸಲು ಅತೀ ಹೆಚ್ಚು ಜನರನ್ನು ಸೇರಿಸುವಂತೆ ಜಿಲ್ಲೆಯ ಶಾಸಕರು ಹಾಗೂ ಕಾರ್ಯಕರ್ತರಿಗೆ ನಾಯಕರ ಆಜ್ಞೆಯಾಗಿದೆಯಂತೆ. ಆದರೆ ಈ ಸಂದರ್ಭದಲ್ಲಿ, ಅಂದು ದುಡಿದು ಅಂದೇ ತಿನ್ನುವ ಸಾಮಾನ್ಯ ವರ್ಗ, ತಳ್ಳುಗಾಡಿ ವ್ಯಾಪಾರಸ್ಥರು, ತುರ್ತು ಚಿಕಿತ್ಸೆ ಸಲುವಾಗಿ ವಾಹನಗಳಲ್ಲಿ ಸಂಚರಿಸುವವರು ಈ ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು, ಅವರಿಗೆ ತೊಂದರೆಯಾಗದ ರೀತಿ ಸಮಾವೇಶ ನಡೆಯಲಿ. ಏಕೆಂದರೆ, ಅದ್ಧೂರಿ ಸಮಾವೇಶಗಳಿಂದ ಇಂತಹ ಬಡಪಾಯಿಗಳಿಗೆ ಹೆಚ್ಚು ತೊಂದರೆಯಾಗುತ್ತದೆಯೇ ಹೊರತು ನಯಾ ಪೈಸೆ ಉಪಯೋಗವಂತೂ ಆಗಲಾರದು.