ಮಂಡ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಂಡು ಈವರೆಗೆ ಹತ್ತಾರು ರಾಜಕೀಯ ನಾಯಕರು ಬಂದು ಹೋಗಿದ್ದರೂ ಜಿಲ್ಲೆ ಅಭಿವೃದ್ಧಿಯಾಗಿರುವುದು ಅಷ್ಟರಲ್ಲೇ ಇದೆ. ಕೆಟ್ಟ ರಸ್ತೆಗಳಿವೆ, ಉತ್ತಮ ವೈದ್ಯಕೀಯ ಸೇವೆ ಇಲ್ಲ, ರೈತರಿಗೆ ಸೂಕ್ತ ಮಾರುಕಟ್ಟೆ ಇಲ್ಲ, ಇನ್ನೂ ವಿದ್ಯುತ್ ಕಾಣದ ಮನೆಗಳಿವೆ, ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲೇ ಇಲ್ಲ, ಎಲ್ಲರಿಗೂ ಉತ್ತಮವಾದ ಶಿಕ್ಷಣ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜಿಲ್ಲೆಯ ಜನ ಈಗಿನ ರಾಜಕೀಯ ಚಟುವಟಿಕೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಮಾಜದ ಶಾಂತಿ ಹಾಳು ಮಾಡದೆ, ಜನರು ವಿವೇಚನೆಯಿಂದ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು.